ನಮ್ಮ ಬಗ್ಗೆ

ಹಸಿರು ದಳ ಕಾರ್ಯಪ್ರವೃತ್ತವಾಗಿರುವ ಸ್ಥಳಗಳು

Hasiru Dala started its work from Bengaluru. Now we are located in around a dozen places spread across three states of South India.

ಬೆಂಗಳೂರು

12-13 ದಶಲಕ್ಷ ಜನಸಂಖ್ಯೆಯಿರುವ ಬೆಂಗಳೂರು ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಮಹಾನಗರ. ನಮ್ಮ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 25,000ಕ್ಕೂ ಹೆಚ್ಚು ತ್ಯಾಜ್ಯ ಆಯುವವರಿದ್ದಾರೆ, ಇವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯೊಂದಿಗೆ ಸಕ್ತಿಯ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರು ತಂಡವನ್ನು ಸಂಪರ್ಕಿಸಲು: info@hasirudala.in

ಹಸಿರು ದಳ
Room No. 13, 2nd Floor, Lakshmi Building
Old No.11/6, New No. 14,
J C Road, Bangalore-560002

ಹಸಿರು ದಳ, ಕಾರ್ಯಕ್ರಮ ಕಛೇರಿ
1745, 7ನೇ ಅಡ್ಡರಸ್ತೆ, 18ನೇ ಮುಖ್ಯರಸ್ತೆ
ಜೆಪಿ ನಗರ 2ನೇ ಫೇಸ್
ಬೆಂಗಳೂರು-560078

ಮೈಸೂರು

ಸಂಸ್ಥೆಯ ಕಾರ್ಯಾಚರಣೆಯು 2016ರಲ್ಲಿ ಅರಮನೆಗಳ ಐತಿಹಾಸಿಕ ನಗರವಾದ ಮೈಸೂರಿಗೆ ಹಬ್ಬಿತು. ನಗರದಲ್ಲಿ ಸುಮಾರು 300 ತ್ಯಾಜ್ಯ ಆಯುವವರ ಕುಟುಂಬಗಳಿವೆ ಮತ್ತು ಹತ್ತಿರದ ನಂಜನಗೂಡಿನಲ್ಲಿ ಸುಮಾರು 150 ಕುಟುಂಬಗಳಿವೆ. ಅವರೆಲ್ಲರೂ ಸ್ಥಳೀಯ ನಗರ ಸಂಸ್ಥೆಯಾದ ಮೈಸೂರು ಮುನಿಸಿಪಲ್ ಕಾರ್ಪೋರೇಷನ್ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೈಸೂರಿನ ತಂಡವನ್ನು ಸಂಪರ್ಕಿಸಿ: anil@hasirudala.in

351, 8th Cross, 5th Main,
Bank Employees Colony,
Bogadi, Mysuru,
Karnataka 570026

ಮಂಗಳೂರು

ಕರಾವಳಿಯ ಬಂದರು ನಗರ ಮಂಗಳೂರು ಅರೇಬಿಯಾ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇವೆ. ವಾಯು, ರಸ್ತೆ, ರೈಲು ಮತ್ತು ಸಮುದ್ರ -ನಾಲ್ಕೂ ಬಗೆಯ ಸಾರಿಗೆ ಮಾರ್ಗಗಳನ್ನು ಹೊಂದಿರುವ ಕರ್ನಾಟಕದ ಏಕೈಕ ನಗರ ಮಂಗಳೂರು. ಹಸಿರು ದಳ ಈ ನಗರದಲ್ಲಿ 2017ರಿಂದ ಕೆಲಸ ಮಾಡುತ್ತಿದೆ. ಇಲ್ಲಿ ತ್ಯಾಜ್ಯ ಆಯುವವರ ಸುಮಾರು 250 ಕುಟುಂಬಗಳಿವೆ. ಹಸಿರು ದಳದ ಮಂಗಳೂರಿನ ತಂಡವನ್ನು ಸಂಪರ್ಕಿಸಲು: vanishree@hasirudala.in /abdul@hasirudala.in

Rin Zin Villa,
Bejai Kapikad,
Mangalore – 575004.

ತುಮಕೂರು

ತುಮಕೂರು ನಗರ ಬೆಂಗಳೂರು ನಗರದಿಂದ 70 ಕಿ.ಮೀ.ದೂರದಲ್ಲಿದೆ. ಸುಮಾರು ಐದು ಲಕ್ಷ ಜನಸಂಖ್ಯೆಯಿದೆ. ಹಸಿರು ದಳ ಇಲ್ಲಿ 2016ರಿಂದ ಕೆಲಸ ಮಾಡುತ್ತಿದೆ. ಈಗ ನಮ್ಮ ಕೆಲಸ ಕಾರ್ಯಗಳು ಸಿರಾ, ಕೃಷ್ಣಗಿರಿ ಮತ್ತು ನೆಲಮಂಗಲದ ವರೆಗೆ ವಿಸ್ತರಿಸಿದೆ.
ಹಸಿರು ದಳದ ತುಮಕೂರು ತಂಡವನ್ನು ಸಂಪರ್ಕಿಸಲು: vishwa.raj@hasirudala.in / mohan@hasirudala.in

Divanghatha D Devraj Urs Badavane,
Ashraya Colony, Dibbur,
Tumkur- 572104.

ಹುಬ್ಬಳ್ಳಿ-ಧಾರವಾಡ

ವಾಯುವ್ಯ ಕರ್ನಾಟಕದಲ್ಲಿರುವ ಅವಳಿ-ನಗರಗಳು ಎಂದರೆ ಹುಬ್ಬಳ್ಳಿ-ಧಾರವಾಡ. ಅಧಿಕೃತವಾಗಿ ಇದನ್ನು ಹುಬ್ಬಳ್ಳಿ ನಗರವೆಂದು ಗುರುತಿಸಲಾಗುತ್ತದೆ, ಇದು ಬೆಂಗಳೂರಿನಿಂದ 484 ಕಿ.ಮೀ.ದೂರದಲ್ಲಿದೆ. ಸುಮಾರು ಹತ್ತು ಲಕ್ಷ ಜನಸಂಖ್ಯೆ. ಹಸಿರು ದಳವು ಈ ವಾಯವ್ಯ ಕರ್ನಾಟಕದ ಜೋಡಿ ನಗರಗಳಲ್ಲಿ 2019ರಿಂದ ಕೆಲಸ ಮಾಡುತ್ತಿದೆ. ಇಲ್ಲಿ ತ್ಯಾಜ್ಯ ಆಯುವವರ ಸುಮಾರು 1,000 ಕುಟುಂಬಗಳು ಇವೆ.

ಹಸಿರು ದಳದ ಹುಬ್ಬಳ್ಳಿ ತಂಡವನ್ನು ಸಂಪರ್ಕಿಸಲು: manjunath@hasirudala.in

Nandadeep Building, 1st Floor,
Old Christian Colony, Hosur.
Hubli, Dharwad, Karnataka 580021

ದಾವಣಗೆರೆ

ಕರ್ನಾಟಕದ ಏಳನೇ ದೊಡ್ಡ ನಗರ ಮತ್ತು ದಾವಣಗೆರೆ ಜಿಲ್ಲೆಯ ಮುಖ್ಯಕೇಂದ್ರ ದಾವಣಗೆರೆ. ಸುಮಾರು ಐದು ಲಕ್ಷ ಜನಸಂಖ್ಯೆ ಇರುವ ನಗರ, ರಾಜ್ಯದಲ್ಲಿ ಬೆಂಗಳೂರಿನ ಉತ್ತರಕ್ಕೆ265 ಕಿ.ಮೀ.ದೂರದಲ್ಲಿದೆ. ಹಸಿರು ದಳ ದಾವಣಗೆರೆಯಲ್ಲಿ 2017ರಿಂದ ಕೆಲಸ ಮಾಡುತ್ತಿದೆ. ಸುಮಾರು 1,000 ತ್ಯಾಜ್ಯ ಆಯುವವರ ಕುಟುಂಬಗಳಿವೆ ಎಂಬ ಅಂದಾಜಿದೆ.

ಹಸಿರು ದಳ ದಾವಣಗೆರೆ ತಂಡವನ್ನು ಸಂಪರ್ಕಿಸಲು: gururaja@hasirudala.in

#3371/54, 3rd Main, 13th Cross,
#3371/54, 3ನೇ ಮೇನ್, 13ನೇ ಕ್ರಾಸ್,
ಅಭಿನಯ ಭಾರತಿ ಪ್ರೌಢಶಾಲೆ ಬಳಿ,
ಯಲ್ಲಮ್ಮ ನಗರ, ದಾವಣಗೆರೆ
ಕರ್ನಾಟಕ – 577002.
Yallamma Nagar. Davanagere,
Karnataka – 577002.

ಚಾಮರಾಜನಗರ

ಕರ್ನಾಟಕ ರಾಜ್ಯದ ದಕ್ಷಿಣದ ತುದಿಯಲ್ಲಿರುವ ಜಿಲ್ಲೆ, ಇದೇ ಜಿಲ್ಲಾ ಕೇಂದ್ರವೂ ಕೂಡ. ಬೆಂಗಳೂರಿನ ದಕ್ಷಿಣಕ್ಕೆ 180 ಕಿ.ಮೀ. ದೂರದಲ್ಲಿರುವ ಈ ಪಟ್ಟಣದ ಅಂದಾಜು ಜನಸಂಖ್ಯೆ ಎಪ್ಪತ್ತು ಸಾವಿರ. ಈ ಪಟ್ಟಣದ್ಲಲಿ ಹಸಿರು ದಳ 2017ರಿಂದ ಕಾರ್ಯನಿರತವಾಗಿದೆ. ಇದರ ಜೊತೆಯಲ್ಲಿ ಸಂಸ್ಥೆಯು ಗುಂಡ್ಲುಪೇಟೆಯಲ್ಲಿ ಕೆಲಸವನ್ನು ವಿಸ್ತರಿಸಿದೆ, ಕೊಳ್ಳೇಗಾಲದಲ್ಲಿಯೂ ಕೆಲಸ ಮಾಡುವ ಸಾಧ್ಯತೆಯನ್ನು ಪರಿಗಣಿಸುತ್ತಿದೆ. ಈ ಕ್ಲಸ್ಟರಿನಲ್ಲಿ ಸುಮಾರು ತ್ಯಾಜ್ಯ ಆಯುವವರ ಸುಮಾರು 500 ಕುಟುಂಬಗಳಿವೆ.

ಹಸಿರು ದಳದ ಚಾಮರಾಜನಗರ ತಂಡವನ್ನು ಸಂಪರ್ಕಿಸಲು:
venkatesh@hasirudala.in

#1819, Ashwini Cable Road
Housing board Colony
Chamarajanagara – 571313

ಕೊಡಗು

ಕಾಫಿ ಕೃಷಿಗೆ ವಿಖ್ಯಾತವಾದ ಕೊಡಗನ್ನು ಸಂದರ್ಶಿಸಲು ಪ್ರತಿವರ್ಷ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.ಹಸಿರು ದಳ 2917ರಲ್ಲಿ ಕೊಡಗಿಗೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿತು.

ಕೊಡಗಿನ ಹಸಿರು ದಳದ ತಂಡವನ್ನು ಸಂಪರ್ಕಿಸಲು: harish@hasirudala.in

ಕೊಯಂಬತ್ತೂರು

The city of Coimbatore is also called the “Manchester of South India” due to its extensive textile industry, fed by the surrounding cotton fields. The city has a population of 1.6 million people and is located in the southern state of Tamil Nadu some 365 kms away from the city of Bengaluru. Hasiru Dala has been working in this emerging industrial city since 2019.

ಹಸಿರು ದಳದ ತಿರುಚಿರಾಪಳ್ಳೀ ಮತ್ತು ಕೊಯಂಬತ್ತೂರು ತಂಡವನ್ನು ಸಂಪರ್ಕಿಸಲು: bakgiyarajan@hasirudala.in

C/o. Keystone Foundation, #28, Valluvar Street,
Shivanandha Colony. Coimbatore,
Tamil Nadu – 641 012

ತಿರುಚಿರಾಪಳ್ಳಿ

ತಮಿಳು ನಾಡಿನಲ್ಲಿರುವ ಪ್ರಾಚೀನ ಪಟ್ಟಣ ತಿರುಚಿರಾಪಳ್ಳಿಯನ್ನು ತಿರುಚಿ ಅಥವಾ ತ್ರಿಚಿ ಎಂದೂ ಕರೆಯಲಾಗುತ್ತದೆ. ಇದು ಐತಿಹಾಸಿಕ ದೇವಸ್ಥಾನಗಳಿಗೆ ಪ್ರಸಿದ್ಧ. ಇಲ್ಲಿನ ಅಂದಾಜು ಜನಸಂಖ್ಯೆ ಸುಮಾರು ಹತ್ತು ಲಕ್ಷ. ಹಸಿರು ದಳ ಇಲ್ಲಿ 2018ರಿಂದ ಕೆಲಸ ಮಾಡುತ್ತಿದೆ. ಹಸಿರು ದಳವು ನಗರದಲ್ಲಿನ ವಿವಿಧ ಬಗೆಯ ತ್ಯಾಜ್ಯ ಆಯುವವರನ್ನು ಗುರುತಿಸುತ್ತಿದೆ. ತ್ಯಾಜ್ಯ ಆಯುವವರೂ ಸೇರಿದ ಹಾಗೆ ಸುಮಾರು 3,000 ಕುಟುಂಬಗಳು ನೈರ್ಮಲ್ಯದ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಅಂದಾಜಿದೆ.

ಹಸಿರು ದಳದ ತಿರುಚಿರಾಪಳ್ಳೀ ಮತ್ತು ಕೊಯಂಬತ್ತೂರು ತಂಡವನ್ನು ಸಂಪರ್ಕಿಸಲು:
bakgiyarajan@hasirudala.in

Hasiru Dala
C/O IIHS #12B,Ponsri Villa,
VOC Road, Contonment,
Trichy, Tamil Nadu- 620001

ಚಿಕ್ಕಬಳ್ಳಾಪುರ

ಸುಮಾರು 55,000 ಜನಸಂಖ್ಯೆಯಿರುವ ಚಿಕ್ಕಬಳ್ಳಾಪುರ ಹೊಸದಾಗಿ ರಚಿಸಲಾಗಿರುವ ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಹಸಿರು ದಳ 2018ರಲ್ಲಿ ತನ್ನ ಕಾರ್ಯವನ್ನು ಈ ಪಟ್ಟಣಕ್ಕೂ ವಿಸ್ತರಿಸಿ, ಸಕ್ರಿಯವಾಗಿ ಕಾರ್ಯನಿರತವಾಗಿದೆ.

ಹಸಿರು ದಳದ ಚಿಕ್ಕಬಳ್ಳಾಪುರ ತಂಡವನ್ನು ಸಂಪರ್ಕಿಸಲು:
sunil@hasirudala.in

N0 9 ವಾರ್ಡ್ ನಂ.15,
ಬಜಾರ್ ರಸ್ತೆ,
ಚಿಕ್ಕಬಳ್ಳಾಪುರ- 562101

ರಾಜಮುಂಡ್ರಿ

ಆಂಧ್ರ ಪ್ರದೇಶದಲ್ಲಿ, ಗೋದಾವರಿ ನದಿಯ ಪೂರ್ವ ತೀರದಲ್ಲಿರುವ ನಗರ ರಾಜಮುಂಡ್ರಿ. ಹಸಿರು ದಳ ಇಲ್ಲಿ 2019ರಿಂದ ಕಾರ್ಯನಿರತವಾಗಿದೆ. ತ್ಯಾಜ್ಯ ಆಯುವ ಸುಮಾರು 1.500 ಜನ ಈ ಪಟ್ಟಣದಲ್ಲಿ ವಾಸಿಸುತ್ತಾರೆ ಎಂಬ ಅಂದಾಜಿದೆ

ಹಸಿರು ದಳದ ರಾಜಮುಂಡ್ರಿ ತಂಡವನ್ನು ಸಂಪರ್ಕಿಸಲು: chittibabu@hasirudala.in

ಹಸಿರು ದಳ
#3-724, 2ನೇ ಮಹಡಿ, ಮುಖ್ಯ ಬೀದಿ,
ರಾಮಕೃಷ್ಣ ನಗರ, ರಾಜಮುಂಡ್ರಿ ಗ್ರಾಮಾಂತರ, ಹುಕುಂಪೇಟ
ಪೂರ್ವ ಗೋದಾವರಿ, ಆಂಧ್ರ ಪ್ರದೇಶ – 533105.

Kannada