ಉಪಕ್ರಮಗಳು

ಶೂನ್ಯ ತ್ಯಾಜ್ಯ

ಜನಸಂಖ್ಯೆ ಹೆಚ್ಚಿದಂತೆಲ್ಲಾ ನಗರಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಸಂಪನ್ಮೂಲಗಳು ಮತ್ತು ಮೂಲಭೂತ ಸೌಕರ್ಯಗಳ ತೀವ್ರ ಮಿತಿಯಿಂದಾಗಿ ಘನ ತ್ಯಾಜ್ಯದ ನಿರ್ವಹಣೆ ನಿರೀಕ್ಷಿತ ಗುಣಮಟ್ಟದ ಸೇವೆಯನ್ನು ಬಯಸುವ ನಗರಕ್ಕೆ ಮತ್ತು ನಾಗರಿಕರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಇತರ ನಾಗರಿಕ ಸಮಸ್ಯೆಗಳಿಗಿಂತ ಭಿನ್ನವಾಗಿ, ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆಗಾಗಿ ಸಮರ್ಪಕವಾದ ಕಾರ್ಯನೀತಿ, ಸುಸ್ಥಿರ ಸಂಸ್ಕರಣೆ, ನಾಗರಿಕರ ಸಹಭಾಗಿತ್ವ, ಹೊಸ ವಿಧಾನಗಳಿಗೆ ಸ್ಪಂದಿಸುವ ಅಧಿಕಾರಿಗಳು, ಮತ್ತು ಚುನಾಯಿತ ಪ್ರತಿನಿಧಿಗಳಿಂದ ಉತ್ತಮ ನಾಯಕತ್ವ - ಇವುಗಳ ಅವಶ್ಯಕತೆಯಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಇದನ್ನು ಸಾಧ್ಯವಾಗಿಸುವ ಈ ಎಲ್ಲ ಗುಣಗಳನ್ನು ಹೊಂದಿರುವ ಕೆಲವೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದಾಗಿದೆ.

Hasiru Dala Zero Waste

ಸವಾಲುಗಳು

ಬೇಡವೆಂದು ಬಿಸಾಕುವಂಥಾದ್ದು ಯಾವುದೂ ಇಲ್ಲ.

ಭೂಭರ್ತಿಗಳು ತಮ್ಮ ಸಾಮರ್ಥಕ್ಕಿಂತ ಹೆಚ್ಚು ಭರ್ತಿಯಾಗಿವೆ, ನೀರಿನ ಆಕರಗಳೆಲ್ಲವೂ ತ್ಯಾಜ್ಯದಿಂದ ಕಟ್ಟಿಕೊಂಡಿವೆ ಆದ್ದರಿಂದ ಆಯಾ ವಾರ್ಡುಗಳಲ್ಲಿ ಉತ್ಪತ್ತಿಯಾಗಿರುವ ತ್ಯಾಜ್ಯವನ್ನು ಆಯಾ ವಾರ್ಡುಗಳಲ್ಲಿಯೇ ಸಂಸ್ಕರಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ.

ತ್ಯಾಜ್ಯ ಸಂಸ್ಕರಣೆಯ ಕಾರ್ಯವನ್ನು ವಿಕೇಂದ್ರೀಕರಿಸಬೇಕು ಎಂಬ ಕಾರ್ಯತಂತ್ರಕ್ಕೆ ಎಲ್ಲ ಬಾಧ್ಯಸ್ಥರ ಸಮ್ಮತಿಯನ್ನು ಪಡೆಯುವುದು ದೀರ್ಘಕಾಲೀನ ಮತ್ತು ಬಹುದೊಡ್ಡ ಸವಾಲಿನ ಕಾರ್ಯವಾಗಿದೆ.

ಇದನ್ನು ಮಾಡುವುದಕ್ಕಾಗಿ, ಇದರಲ್ಲಿ ಒಳಗೊಳ್ಳುವ ಎಲ್ಲ ಬಗೆಯ ಬಾಧ್ಯಸ್ಥರ ನಡುವೆ ಉತ್ತಮತರ ಸಂವಹನದ ಅಗತ್ಯವಿದೆ:

  • ತ್ಯಾಜ್ಯವನ್ನು ಸಂಸ್ಕರಿಸಲು ಸೂಕ್ತವಾದ ಸ್ಥಳವನ್ನು ವಾರ್ಡಿನ ಒಳಗೆಯೇ ಗುರುತಿಸುವುದು ಮತ್ತು ವಾರ್ಡ್ ಮಟ್ಟದಲ್ಲಿಯೇ ಅಲ್ಲಿನ ತ್ಯಾಜ್ಯವನ್ನು ಸಂಸ್ಕರಿಸುವುದಕ್ಕಾಗಿ ಒಂದು ಯೋಜನೆಯನ್ನು ರೂಪಿಸುವುದು.
  • ಸ್ಥಳೀಯ ಸರಕಾರವು ಹಂಚಿಕೆ ಮಾಡಿದ ಹಣಕಾಸು ಅವಕಾಶದಲ್ಲಿಯೇ ಹಸಿ ತ್ಯಾಜ್ಯವನ್ನು ಸಂಸ್ಕರಿಸಲು ಸೂಕ್ತವಾದ ತಂತ್ರಜ್ಞಾನವನ್ನು ಕಂಡುಕೊಳ್ಳುವುದು.

ನಮ್ಮ ಕಾರ್ಯವಿಧಾನ

ಹಸಿರು ದಳ ಶೂನ್ಯ ತ್ಯಾಜ್ಯ ಎಂಬ ಒಂದು ಉಪಕ್ರಮವನ್ನು ಆರಂಭಿಸಿದೆ, ಇದು ತ್ಯಾಜ್ಯವನ್ನು ಮೂಲದಲ್ಲಿಯೇ ಮೂರು ಬಗೆಯಲ್ಲಿ ಪ್ರತ್ಯೇಕಿಸುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತದೆ: ನಾಗರಿಕರನ್ನು ಬದ್ಧತೆಯೊಂದಿಗೆ ತೊಡಗಿಸಿಕೊಳ್ಳುವುದು, ತ್ಯಾಜ್ಯದ ಸಂಸ್ಕರಣೆಯನ್ನು ವಿಕೇಂದ್ರೀಕರಿಸುವುದು, ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯಲ್ಲಿ ತ್ಯಾಜ್ಯ ಆಯುವವರನ್ನು ಅಧಿಕೃತವಾಗಿ ಏಕೀಕರಿಸುವುದು. ತ್ಯಾಜ್ಯವು ಅದು ಉತ್ಪತ್ತಿಯಾದ ವಾರ್ಡಿನಿಂದ (ಆಡಳಿತ ವಿಭಾಗ) ಸಂಸ್ಕರಣೆಗಾಗಿ ಹೊರಗೆ ಹೋಗುವ ಪ್ರಮಾಣವನ್ನು ಕಡಿಮೆ ಮಾಡುವುದೇ ಇಲ್ಲಿನ ಉದ್ದೇಶ. ಶೂನ್ಯ ತ್ಯಾಜ್ಯ ಉಪಕ್ರಮವು ಬೆಂಗಳೂರಿನಲ್ಲಿ ಆರಂಭವಾಗಿದೆ, ಬಹಳ ಬೇಗನೇ ಮೈಸೂರು ಮತ್ತು ತುಮಕೂರಿನಲ್ಲಿಯೂ ಆರಂಭಿಸಲಾಗುವುದು.

ಇನ್ನಷ್ಟು ಓದಿ

ಪ್ರಕರಣ ಅಧ್ಯಯನ

ವಾರ್ಡ್ 177, ಉತ್ತರ ಬೆಂಗಳೂರಿನ ಜೆ.ಪಿ.ನಗರ ಒಂದು ವಾರ್ಡು. ಇಲ್ಲಿನ ಮಹಿಳಾ ಶಾಸಕರಿಗೆ ಪರಿಸರದ ಸಮಸ್ಯೆಗಳ ಕುರಿತು, ಅದರಲ್ಲೂ ಮುಖ್ಯವಾಗಿ ತ್ಯಾಜ್ಯದ ಸುಸ್ಥಿರ ನಿರ್ವಹಣೆಯ ಕುರಿತು ತುಂಬಾ ಕಾಳಜಿ ಇತ್ತು. ಅವರ ಆಹ್ವಾನದ ಮೇರೆಗೆ ನಾವು ಶೂನ್ಯ ತ್ಯಾಜ್ಯದ ವಾರ್ಡಿನ ಉಪಕ್ರಮವನ್ನು ಇಲ್ಲಿಂದಲೇ ಆರಂಭಿಸಿದೆವು. ಇದಾದ ಸುಮಾರು ಒಂದು ವರ್ಷದ ನಂತರ -

ಪ್ರಕರಣ ಅಧ್ಯಯನ

  • WoW ಎನ್ನುವಂಥ ಮಹಿಳಾ ಗುಂಪು ತಮ್ಮ ಓಣಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವುದಕ್ಕೆ ತೊಡಗಿದರು. ಇಲ್ಲಿ 70 ಎಚ್ ಎಚ್ ಎಸ್-ನ್ನು ಸ್ಥಾಪಿಸಲಾಗಿದೆ, ಈ ಓಣಿ ಕಾಂಪೋಸ್ಟರ್ ದಿನಕ್ಕೆ ಸರಾಸರಿ 25 ಕೆ.ಜಿ. ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು WoW ಯ ಮೇಲ್ವಿಚಾರಣೆಯಲ್ಲಿ ಆ ಬೀದಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಕಾರ್ಯಚಾಲಿಸುತ್ತಾರೆ. ಮೊದಲ ಬ್ಯಾಚಿನಲ್ಲಿ 365 ಕಿಲೋ ಕಾಂಪ್ಲೋಸ್ಟನ್ನು ತಯಾರಿಸಲಾಯಿತು. ಈ ಓಣಿ ಕಾಂಪೋಸ್ಟರನ್ನು ಪ್ರಾಯೋಜಿಸಿದ್ದು ಹಸಿರು ದಳ.
  • ಮನೆಯಲ್ಲಿಯೇ ತ್ಯಾಜ್ಯವನ್ನು ಪ್ರತ್ಯೇಕಿಸುವ ಕಾರ್ಯವು 90%ಗೆ ಏರಿದೆ.
  • ನಾಗರಿಕರು ಗುಂಪು ರಚಿಸಿಕೊಂಡು, ತ್ಯಾಜ್ಯದ ಕುರಿತಾಗಿ ಅಷ್ಟೇ ಅಲ್ಲ, ಅಲ್ಲಿನ ವಾಯು ಮಾಲಿನ್ಯ ಇತ್ಯಾದಿಗಳ ಕುರಿತೂ ಈಗ ಕೆಲಸ ಮಾಡತೊಡಗಿದ್ದಾರೆ.
  • ನಾಗರಿಕರು ಈಗ ತ್ಯಾಜ್ಯವನ್ನು ಕಡಿಮೆ ಮಾಡುವುದು, ಅದನ್ನು ಪ್ರತ್ಯೇಕಿಸುವುದು ಮತ್ತು ಕಾಂಪೋಸ್ಟ್ ಮಾಡುವುದರ ಕುರಿತು ಹೆಚ್ಚು ಪ್ರಜ್ಞಾವಂತರಾಗಿದ್ದಾರೆ.
  • ಪ್ರತ್ಯೇಕಿಸದ ನಂತರ ಸ್ವಚ್ಛಗೊಳಿಸುವ ಕಾರ್ಯವನ್ನು ಓಣಿಯಲ್ಲಿ ಸಾಧಿಸಲಾಗಿದೆ ಮತ್ತು ತ್ಯಾಜ್ಯದ ಸಂಗ್ರಹಣೆಯನ್ನು ಸುಗಮಗೊಳಿಸಲಾಗಿದೆ.
  • ಇತರ ನಾಗರಿಕ ಸಂಸ್ಥೆಗಳು - ಭಾರತ ಮತ್ತು ವಿದೇಶದಿಂದ - ಕಲಿಯಲು ಮತ್ತು ಅಳವಡಿಸಿಕೊಳ್ಳಲು ವಾರ್ಡ್‌ಗೆ ಭೇಟಿ ನೀಡಿವೆ.
  • ಅಂತರರಾಷ್ಟ್ರೀಯ ವಿದ್ಯಾರ್ಥಿ ಗುಂಪುಗಳು ಸಹ ವಾರ್ಡ್‌ಗೆ ಭೇಟಿ ನೀಡಿವೆ
  • ಮುಂದಿನ ದಿನಗಳಲ್ಲಿ ನಾವು ಮತ್ತೊಂದು ವಾರ್ಡ್‌ಗೆ (44) ವಿಸ್ತರಿಸುತ್ತಿದ್ದೇವೆ ಮತ್ತು ಅಂತಿಮವಾಗಿ 2021 ರ ವೇಳೆಗೆ ಒಟ್ಟು 5 ವಾರ್ಡ್‌ಗಳಿಗೆ ವಿಸ್ತರಿಸುತ್ತಿದ್ದೇವೆ, ಆದರೆ (# 44). 2021 ರ ನಂತರ.

ಶಿಕ್ಷಕರಿಗೆ ಟ್ರಾಷೋನಮಿಕ್ಸಿನಲ್ಲಿ ತರಬೇತಿ ನೀಡುವುದು

Kannada