ಉಪಕ್ರಮಗಳು

Creating Livelihoods in Solid Waste Managment

2011ರಲ್ಲಿ, ಬೆಂಗಳೂರು ನಗರದಲ್ಲಿ ತ್ಯಾಜ್ಯವನ್ನು ಅಗತ್ಯವಾದ ರೀತಿಯಲ್ಲಿ ಪ್ರತ್ಯೇಕಿಸುತ್ತಿರಲಿಲ್ಲ. ಮುನಿಸಿಪಲ್ ಕಾರ್ಪೊರೇಷನ್ ಮನೆಗಳು, ರಸ್ತೆಗಳು ಮತ್ತು ಸ್ಥಳೀಯ ಕಸದ ಗುಡ್ಡೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಿತ್ತು ಮತ್ತು ಬೆಂಗಳೂರಿನ ನೆರೆಹೊರೆಯಲ್ಲಿರುವ ಗ್ರಾಮಗಳಲ್ಲಿ ಇರುವ ಡಂಪಿಂಗ್ ಸೈಟುಗಳಿಗೆ ಸಾಗಣೆ ಮಾಡುತ್ತಿತ್ತು.

2013ರ ಹೊತ್ತಿಗೆ, ಬೆಂಗಳೂರಿನಲ್ಲಿ ದಿನಕ್ಕೆ 4,000 ಟನ್ನಿನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು. ಒಂದು ಅಂದಾಜಿನ ಪ್ರಕಾರ 2047ರ ವೇಳೆಗೆ, ವ್ಯವಹಾರವು ಎಂದಿನಂತೆ ಹೀಗೇ ಮುಂದುವರೆದರೆ, ಭಾರತದಲ್ಲಿ ಉತ್ಪನ್ನವಾಗುವ ಒಟ್ಟು ತ್ಯಾಜ್ಯದ ಪ್ರಮಾಣ ವರ್ಷಕ್ಕೆ 26 ಕೋಟಿ ಟನ್ನುಗಳಷ್ಟು; ಮತ್ತು ಇದರ ಮೌಲ್ಯವು 260 ಕೋಟಿ ಯುರೋ(EBTC n.d.) ಆಗುತ್ತದೆ. ಜನಸಂಖ್ಯಾ ಹೆಚ್ಚಳ, ಆರ್ಥಿಕ ಬೆಳವಣಿಗೆ ಮತ್ತು ಬದಲಾಗುವ ಗ್ರಾಹಕ ಮಾದರಿಗಳು-ಮತ್ತು ಇದರ ಉಪಪರಿಣಾಮವಾದ ನಗರೀಕರಣ ಶೀಘ್ರಗತಿಯಲ್ಲಿ ಹೆಚ್ಚಾಗುತ್ತಿದೆ ಎಂಬುದು ಅಚ್ಚರಿಯೇನಲ್ಲ. ಅದೇ ಹೊತ್ತಿನಲ್ಲಿ ನಗರದ ತ್ಯಾಜ್ಯದ ವಸ್ತುಗಳನ್ನು ಮರುಬಳಕೆ ಮತ್ತು ಪುನರುತ್ಪಾದನೆ ಮಾಡುವ ಸಾಮರ್ಥ್ಯವೂ ಬೆಳೆಯಬೇಕಾಗುತ್ತದೆ.

ಬೆಂಗಳೂರು ನಗರದಲ್ಲಿ ನಾಗರಿಕರು ಮತ್ತು ತ್ಯಾಜ್ಯ ಆಯುವವರು ಸಂಘಟಿತರಾಗುತ್ತಿದ್ದ ಹಾಗೆ, ತ್ಯಾಜ್ಯದ ನಿರ್ವಹಣೆಯನ್ನು ವಿಕೇಂದ್ರೀಕರಿಸುದು ಮತ್ತು ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವುದು; ಕಾಂಪೋಸ್ಟಿಂಗ್ ಜೊತೆಗೆ ತ್ಯಾಜ್ಯ ಆಯುವವರನ್ನು ಒಣ (ಅಜೈವಿಕ) ತ್ಯಾಜ್ಯದ ನಿರ್ವಹಣೆಯಲ್ಲಿ ಏಕೀಕರಿಸುವುದು ಮುಖ್ಯ ಲಕ್ಷ್ಯವಾಯಿತು. ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗೆ ಈ ಕಾರ್ಯತಂತ್ರದಲ್ಲಿ ನಂಬಿಕೆ ಬಂದಿತು ಮತ್ತು ಅದು, ವಿಕೇಂದ್ರೀಕೃತವಾಗಿ ಅಜೈವಿಕ ತ್ಯಾಜ್ಯವನ್ನು ಒಟ್ಟುಗೂಡಿಸುವ “ಒಣ ತ್ಯಾಜ್ಯ ನಿರ್ವಹಣೆ ಕೇಂದ್ರ”ಗಳನ್ನು ನಿರ್ಮಿಸತೊಡಗಿತು, (50ಕ್ಕೂ ಹೆಚ್ಚು ಮನೆಗಳಿರುವ ಸಮುಚ್ಚಯ ಅಥವಾ ದಿನಕ್ಕೆ 10 ಕೆ.ಜಿ. ಜೈವಿಕ ತ್ಯಾಜ್ಯವನ್ನು ಉತ್ಪತ್ತಿ ಮಾಡುವ)ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ತ್ಯಾಜ್ಯವನ್ನು ಪಟ್ಟಿಮಾಡಿದ ವೆಂಡರುಗಳ ಮೂಲಕ ತಾವೇ ನಿರ್ವಹಿಸಿಕೊಳ್ಳಬೇಕು ಎಂಬ ಪದ್ಧತಿಯನ್ನು ಉತ್ತೇಜಿಸಿದರು. ಈ ತತ್ತ್ವಗಳು ನಂತರದ ದಿನಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು, 2016ರ ಭಾಗವಾದವು. ತ್ಯಾಜ್ಯ ನಿರ್ವಹಣೆಯ ಸಮರ್ಥವಾದ ತತ್ತ್ವಗಳು ಮತ್ತು ತಂತ್ರಗಳ ನಿಟ್ಟಿನಲ್ಲಿ ಬೆಂಗಳೂರು ದೇಶಕ್ಕೇ ಮಾರ್ಗದರ್ಶಿಯಾಯಿತು.

2017ರಲ್ಲಿ, ಬೆಂಗಳೂರಿನ ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರು, ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳ ಮೂಲಕ ಪ್ರತ್ಯೇಕಿತ ಒಣ ಕಸವನ್ನು ಮನೆಮನೆಯಿಂದ ಸಂಗ್ರಹ ಮಾಡುವ ಕೆಲಸವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಜೊತೆಯಲ್ಲಿ ಒಪ್ಪಂದವನ್ನು ಮಾಡಿಕೊಂಡರು. ನಗರದಲ್ಲಿನ ಘನ ತ್ಯಾಜ್ಯದ ನಿರ್ವಹಣೆಗಾಗಿ ತ್ಯಾಜ್ಯ ಆಯುವವರೊಂದಿಗೆ ಒಪ್ಪಂದಕ್ಕೆ ಸಹಿಹಾಕಿದ ಮೊದಲ ಮತ್ತು ಏಕೈಕ ಸ್ಥಳೀಯ ಸರಕಾರವಾಗಿತ್ತು; ಮತ್ತು ದೇಶದಲ್ಲಿಯೇ ಇದನ್ನು ಮಾದರಿಯಾಗಿ ಭಾವಿಸಲಾಯಿತು.

ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಭೂಚಿತ್ರಬದಲಾಗುತ್ತಿರುವ ಸನ್ನಿವೇಶದಲ್ಲಿ ಸಂಗತವಾಗಬೇಕು ಎನ್ನುವುದಾದರೆ ತ್ಯಾಜ್ಯ ಆಯುವವರು ತಮ್ಮ ಕೆಲಸದ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಅತಿ ಮುಖ್ಯವಾಗಿತ್ತು. ಹಸಿರು ದಳ ಅವರನ್ನು DWCCಗಳು, ಬಯೋಮಿಥನೈಸೇಷನ್ ಪ್ಲಾಂಟುಗಳು ಮತ್ತು ಮನೆಮನೆಯಿಂದ ತ್ಯಾಜ್ಯವನ್ನು ಸಂಗ್ರಹಿಸುವ ಸೇವಾದಾತರನ್ನಾಗಿ ತರಬೇತುಗೊಳಿಸಿದರು.

From August 2020, BBMP’s system (enshrined in the SWM Bye-Laws of 2020) is that every DWCC will be managed by waste pickers or SHG groups of waste pickers and women, who will also manage the door-to-door collection in their respective wards. Prior to this the source of incoming waste for the DWCC was through drop off inorganic waste by informal collectors at the DWCCs. In the new system, all types of dry waste i.e. both recyclable and non-recyclable waste is collected, processed and sent to proper destinations thus minimising the waste that gets diverted to landfills.

Of these 141 DWCCs in Bengaluru, 37 centres are run by waste pickers and Self-Help Groups supported by Hasiru Dala, and we are to support the running of another 22. Our role is that of Resource Organisation (RO) which is to oversee the collection, the data transparency, validation, value creation, grievance redressal, and social inclusion of the informal workers. The BBMP looks at Hasiru Dala as a resource organisation and lead of the other 5 resource organisations that are engaged in facilitating dry waste collection in remaining wards. In the city, for dry waste management, waste pickers have now become entrepreneurs hiring anywhere between 5-20 waste pickers depending on the quantum of waste received.

ಇನ್ನಷ್ಟು ಓದಿ

ಸವಾಲುಗಳು

ತ್ಯಾಜ್ಯ ಆಯುವವರನ್ನು ಘನ ತ್ಯಾಜ್ಯ ನಿರ್ವಹಣೆ ನಿರ್ವಹಣೆಯ ಚೌಕಟ್ಟಿನಲ್ಲಿ ಏಕೀಕರಿಸುವ ಪ್ರಕ್ರಿಯೆಯಲ್ಲಿ ಹಸಿರು ದಳ ಎದುರಿಸಿದ ಸವಾಲು ಮೂರು ಬಗೆಯದಾಗಿತ್ತು.

ಮೊದಲನೆಯದಾಗಿ, ರಸ್ತೆ ಬದಿಗಳಲ್ಲಿ ಒಣ ತ್ಯಾಜ್ಯವನ್ನು ಆಯ್ದುಕೊಳ್ಳುತ್ತಾ ಓಡಾಡುತ್ತಿದ್ದವರನ್ನು ತ್ಯಾಜ್ಯ ನಿರ್ವಹಣೆಯ ಸೇವಾದಾತರಾಗುವತ್ತ ಮತ್ತು ಉದ್ಯಮಶೀಲರಾಗುವತ್ತ ಮನವೊಲಿಸುವುದು. ಇದಕ್ಕೆ ತ್ಯಾಜ್ಯ ಆಯುವವರಲ್ಲಿ ಆಳವಾದ ವರ್ತನೆ ಬದಲಾವಣೆ ಆಗಬೇಕಾದ ಅಗತ್ಯವಿತ್ತು; ಬಿಬಿಎಂಪಿ ಅಧಿಕಾರಿಗಳೊಂದಿಗೆ ವ್ಯವಹರಿಸುವುದರಿಂದ ಹಿಡಿದು, ವಾಹನ ಚಾಲನೆ, ಕಾಂಪೋಸ್ಟಿಂಗ್, ದತ್ತಾಂಶಗಳನ್ನು ನಿಭಾಯಿಸುವುದು ಮತ್ತು ಸಮವಸ್ತ್ರಗಳಿಗೆ ಒಗ್ಗಿಕೊಳ್ಳುವ ವರೆಗೆ ಹಲವು ಬದಲಾವಣೆಗಳನ್ನು ಅವರು ರೂಢಿಸಿಕೊಳ್ಳಬೇಕಾಗಿತ್ತು.

ಎರಡನೆಯದಾಗಿ, ಸುಸ್ಥಿರ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಗಾಗಿ ತ್ಯಾಜ್ಯ ಆಯುವವರ ಪ್ರಸ್ತುತ ಕೌಶಲವನ್ನು ಪಳಗಿಸಬಹುದು ಎಂಬುದನ್ನು ಬಿಬಿಎಂಪಿ ಒಪ್ಪಿಕೊಳ್ಳುವ ಹಾಗೆ ಮಾಡುವುದು, ಮತ್ತು ತ್ಯಾಜ್ಯ ನಿರ್ವಹಣೆಯನ್ನು ವಿಕೇಂದ್ರೇಕರಿಸುವ ವಿಚಾರವನ್ನು ಅಂಗೀಕರಿಸುವಂತೆ ಮಾಡುವುದು ಬಹುದೊಡ್ಡ ಸವಾಲಾಗಿತ್ತು.

ಕೊನೆಯದಾಗಿ, ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವ ಪದ್ಧತಿಗಾಗಿ ನಾಗರಿಕರ ವರ್ತನೆಯಲ್ಲಿಯೂ ಬದಲಾವಣೆ ಆಗಬೇಕಾಗಿತ್ತು. ಈ ಪ್ರಯಾಸವು ಯಶಸ್ವಿಯಾಗಬೇಕು ಎಂದರೆ ಅವರ ಪರಿಭಾವನೆಯಲ್ಲಿ ಮತ್ತು ತ್ಯಾಜ್ಯ ಮತ್ತು ತ್ಯಾಜ್ಯ ಆಯುವವರ ಕುರಿತು ಅವರ ಪರಿಭಾವನೆಯಲ್ಲಿ ಆಳವಾದ ಬದಲಾವಣೆ ಆಗಬೇಕಾಗಿತ್ತು.

ಮುನಿಸಿಪಲ್ ಪ್ರಾಧಿಕಾರಿಗಳಿಂದ ಆದ ಎಲ್ಲ ಒಳ್ಳೆಯ ಕಾರ್ಯಗಳ ಹೊರತಾಗಿಯೂ, DWCCಗಳನ್ನು ಹಂಗಾಮಿಯಾಗಿ ನಿರ್ಮಿಸಿದ್ದರಿಂದ ಆ ಸೌಕರ್ಯಗಳು ಶಿಥಿಲಗೊಂಡಿದ್ದವು. ಅವುದೀರ್ಘಕಾಲ ಕಾರ್ಯನಿರ್ವಹಿಸಲು ಸಾಧ್ಯವಿರಲಿಲ್ಲ. ವಾಯುಗುಣ ಬದಲಾವಣೆಯಿಂದ ಉಂಟಾಗುವ ಹವಾಮಾನ ಸಂಬಂಧಿತ ಘಟನೆಗಳು ಸಂಕಷ್ಟಗಳನ್ನು ಉಲ್ಬಣಗೊಳಿಸಿವೆ, ಹಠಾತ್ತಾಗಿ ಉಂಟಾಗುವ ಪ್ರವಾಹಗಳು DWCC ಮೂಲಸೌಕರ್ಯಗಳಿಗೆ ಮತ್ತು ಅಲ್ಲಿ ಸಂಗ್ರಹಿಸಿ ಇಡಲಾಗಿದ್ದ ಪುನರುತ್ಪಾದಕ ತ್ಯಾಜ್ಯಕ್ಕೂ (ಮೌಲ್ಯ ನಷ್ಟ ಮತ್ತು ಪುನರುತ್ಪಾದಕ ಗುಣವನ್ನು ಕಡಿಮೆ ಮಾಡುವ ಮೂಲಕ) ತೀವ್ರ ಹಾನಿಯುಂಟುಮಾಡಿವೆ.ಇದರಿಂದಾಗಿಕಾರ್ಮಿಕರಿಗೆಅನಾರೋಗ್ಯಕರಪರಿಸರ ಉಂಟಾಗುತ್ತದೆ;ಡೆಂಗ್ಯೂ, ಮಲೇರಿಯಾ, ಚರ್ಮದಗಾಯಗಳುಮತ್ತುಬ್ಲಾಕ್ ಮೋಲ್ಡ್ ನ ಸಾಮೀಪ್ಯದಿಂದ ಅನಾರೋಗ್ಯ ಉಂಟಾಗುತ್ತವೆ.

ಇನ್ನಷ್ಟು ಓದಿ

ನಮ್ಮ ಕಾರ್ಯವಿಧಾನ

ನಮ್ಮ ಕಾರ್ಯವಿಧಾನದ ಮೂಲದಲ್ಲಿರುವ ಉದ್ದೇಶ ತ್ಯಾಜ್ಯ ಅಯುವವರ ಕಾಯಕಕ್ಕೆ ಘನತೆಯನ್ನು ತರುವುದಾಗಿದೆ. ಅವರ ಜೀವನೋಪಾಯಕ್ಕೆ ಗೌರವ ಸಲ್ಲಿಸುವ ಸಲುವಾಗಿ ತ್ಯಾಜ್ಯ ಕಾರ್ಮಿಕರು ಅವರ ಹಣಕಾಸು ಸ್ಥಿರತೆಯನ್ನು ಹೆಚ್ಚಿಸುವ ಮತ್ತು ಅವರ ಕೆಲಸದ ಸ್ಥಿತಿಗಳನ್ನು ಸುಧಾರಿಸುವ ಮಾರ್ಗವನ್ನು ನಾವು ಸೃಷ್ಟಿಸಿದ್ದೇವೆ.

  • ತ್ಯಾಜ್ಯ ಆಯುವವರು ಸೇವಾದಾತರಾಗಲು ಅಗತ್ಯವಾದ ತರಬೇತಿ ಮತ್ತು ಕೌಶಲ ಸಂವರ್ಧನೆ. ನೀಡಲಾದ ತರಬೇತಿಯಲ್ಲಿ, ಜೈವಿಕ ಕಸದ ನಿರ್ವಹಣೆ, ಇವೆಂಟುಗಳಿಂದ ಉಂಟಾಗುವ ತ್ಯಾಜ್ಯದ ನಿರ್ವಹಣೆ ಮತ್ತು ಸರ್ಟಿಫಿಕೇಷನ್ ಕೋರ್ಸ್ ಒಳಗೊಂಡಿದ್ದವು: ವೇಸ್ಟ್ ವೈಜ್ ಟ್ರಸ್ಟ್ ಮತ್ತು ಜೈನ್ ವಿಶ್ವವಿದ್ಯಾಲಯದ(ಡೀಮ್ಡ್ ಯುನಿವರ್ಸಿಟಿಯ) ಸಹಯೋಗದೊಂದಿಗೆ ಸಣ್ಣ ಉದ್ಯಮಿಗಳ ಕೌಶಲವನ್ನು ಹೆಚ್ಚಿಸುವುದು.
  • ತ್ಯಾಜ್ಯ ಆಯುವವರ ಕಾಯಕಕ್ಕೆ ಘನತೆಯನ್ನು ಒದಗಿಸಲು ಮತ್ತು ನಿಗದಿತ ಆದಾಯವನ್ನು ತರುವ ಸಲುವಾಗಿ, ನಗರದ ಔಪಚಾರಿಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯಲ್ಲಿ ಏಕೀಕರಿಸುವ ಸಲುವಾಗಿ ಅಗತ್ಯವಾದ ಕಾರ್ಯನೀತಿ ಮತ್ತು ಶಾಸನಗಳನ್ನು ತರುವ ಸಲುವಾಗಿ ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರಕಾರಗಳೊಡನೆ ಕೆಲಸ ಮಾಡುವುದು.
  • ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ತ್ಯಾಜ್ಯ ಆಯುವವರನ್ನು ನೇಮಕಮಾಡಿ ತ್ಯಾಜ್ಯವನ್ನು ಮನೆಮನೆಯಿಂದ ಸಂಗ್ರಹಿಸುವಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವಂತಾಗಲು ಅವರನ್ನು ತರಬೇತುಗೊಳಿಸುವುದು.
  • ಬೆಂಗಳೂರಿನಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳುಆರಂಭಿಸಲಾಗಿದೆ, ನಂತರ ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾದ, ದಾವಣಗೆರೆ, ಚಾಮರಾಜನಗರ, ಮಂಗಳೂರಿನ ಉಲ್ಲಾಳ, ರಾಜಮುಂಡ್ರಿಗೆ ವಿಸ್ತರಿಸಲಾಗಿದೆ.DWCCಗಳು ಸುಸ್ಥಿರ ಮಾದರಿಯನ್ನು ಪ್ರತಿನಿಧಿಸುವ ಸಾಮಾಜಿಕ ಪರಿಗಣನೆಗಳು, ಹಣಕಾಸು ಪರಿಗಣನೆಗಳು ಮತ್ತು ಪರಿಸರದ ಪ್ರಭಾವ ಈ ಮೂರು ಮೂಲೆಗಲ್ಲುಗಳನ್ನು ಪ್ರದರ್ಶಿಸುತ್ತವೆ.

ಪ್ರಕರಣ ಅಧ್ಯಯನ

ಒಣ ತ್ಯಾಜ್ಯ ನಿರ್ವಹಣೆಗೆ ನಾಲ್ಕು ಹಂತಗಳ ಕಾರ್ಯಕ್ರಮ

ಹಸಿರು ದಳ ಕರ್ನಾಟಕದ ಐದು ನಗರಗಳಲ್ಲಿ, ಈ ಮುಂಚೆ ತ್ಯಾಜ್ಯ ಆಯುವವರು ಮತ್ತು ಸ್ಕ್ರ್ಯಾಪ್ ಡೀಲರುಗಳಾಗಿದ್ದವರು ಕಾರ್ಯಚಾಲನೆ ಮಾಡುತ್ತಿರುವ 45 ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳಿಗೆ ಬೆಂಬಲವನ್ನು ನೀಡುತ್ತಿದೆ, ಮತ್ತು ಇದನ್ನು ಇತರ ನಗರಗಳು ಮತ್ತು ವಾರ್ಡುಗಳಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ. DWCCಗಳ ನಿರ್ವಹಣೆಯಲ್ಲಿ ಹಸಿರು ದಳದ ಪಾತ್ರದಲ್ಲಿ ಉದ್ಯಮಿಗಳು ಈ ಕೇಂದ್ರಗಳನ್ನು ಕಾರ್ಯಚಾಲನೆ ಮಾಡುವುದಕ್ಕೆ ಬೆಂಬಲಿಸುವುದು, ನಾಗರಿಕರನ್ನು ಜೊತೆಗೆ ತೊಡಗಿಸಿಕೊಂಡು ನಿವಾಸಿಗಳಲ್ಲಿ, ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವುದರ ಮಹತ್ವ ಮತ್ತು ತ್ಯಾಜ್ಯ ನಿರ್ವಹಣೆಯ ಸುಸ್ಥಿರ ವಿಧಾನಗಳ ಕುರಿತು ಜಾಗೃತಿಯನ್ನು ಮೂಡಿಸುವುದು, ಮತ್ತು ಈ ವಾರ್ಡುಗಳಲ್ಲಿ ತ್ಯಾಜ್ಯದ ಸಂಗ್ರಹಣೆಯನ್ನು ಸುಗಮಗೊಳಿಸುವುದು ಸೇರಿವೆ.

Kannada